Feeds:
Posts
Comments

ಸಾಮಾನ್ಯ ಕಾಷ್ಟದೋಲು ಕಾಣುವ ಗಂಧದ ಕೋರಡೋಂದು
ತಾ ಸೂಸುವ ಪರಿಮಳವು ಅಮರವಾಗಿರುವಂತೆ
ಸಾಮಾನ್ಯ ಹೆಣ್ಣು ನೋಡಲು ನೀನಾದರೂ ಎನ್ನ ಅಕ್ಕಮ್ಮ
ನೀ ಸೂಸಿದ ಪ್ರೀತಿ ಮಾಡಿದಾ ಸೇವೆ ಅದು ಅಮರವಮ್ಮ

ತೀಡಿ ತೀಡಿ ತೇದರೂ ಲೆಕ್ಕಿಸದೇ ತನ್ನಂದವ ಗಂಧದ ತುಂಡು
ಮೊಲ ಸ್ವಭಾವವ ಬಿಡದೆ ಹೆಚ್ಚು ಸುಗಂಧವ ಪಸರಿಸುವಂದದಿ
ದುಡಿಸಿ ದುಡಿಸಿ ಸವೆಸಿದರೂ ಲೆಕ್ಕಿಸದೇ ನಿನ್ನ ಚಂದವ
ಪಸರಿಸಿದೆ ಆದರೂ ದಿಗಂತಕೆ ಪ್ರೀತಿಯ ಸುಗಂಧವ

ಕೊಡಲಿ ಉಳಿಗಳ ಪೆಟ್ಟ ಸಹಿಸುತ ತಾ ತಾಳ್ಮೆಯಲಿ
ಚಂದನದ ಬೊಂಬೆಗಳ ರೂಪದಲಿ ಗಂಧವು ಹೊರಬರುವಂದದಲಿ
ಮೊನಚು ಮಾತುಗಳ ಹೊಡೆತ ಕೊಂಕೊ ನುಡಿಗಳ ಪೆಟ್ಟು ಸಹಿಸುತ ಸಹನೆಯಲಿ
ನೊಂದು ಬೆಂದು ಮುಳುಗಿದರೂ  ನಗುನಗುತ ಮೇಲೆದ್ದೆ ನೀ ನಿಜ ಸತಿಯ ರೂಪದಲಿ

ಹದಿನೈದು ವರ್ಷಗಳು ಹಾಸಿಗೆಯಲಿ ನರಳಿ ಹೊರಳಾಡಿದೆ
ಆಗಿ ನೀ ರೋಗಗಳ ಆಕ್ರಮಣಕ್ಕೆ ಬಲಿ
ಆದರೂ ಮುನ್ನಡೆದೆ ನೀ ಬಿಡದೆ ವ್ರತ ಪೂಜೆಗಳ ಕಾರ್ಯದಲಿ
ಕಷ್ಟ ನಷ್ಟಗಳ ತೋರ್ಗೊಡದೆ ನಿನ್ನ ನಗು ಮುಖದಲಿ

ನಿನ್ನ ತಾಳ್ಮೆಯ ವಾರಿಧಿಯಲಿ ಮುಳುಗಿದವು ನೋವು ನಲಿವುಗಳು
ಎಲ್ಲರನು ನೆನೆಸಿದವು ನಿನ್ನ ಹೃದಯ ಕಾರಂಜಿಯ ಪ್ರೀತಿ ತುಂತುರುಗಳು
ಎಪ್ಪತ್ತಾರು ವರ್ಷಗಳ ನಿನ್ನ ಈ ಬದುಕಿನಾ ಹಾದಿ
ಮಾಡಿದವು ನಿನ್ನ ಸಂಕಲ್ಪಗಳ ಛಲದ ಬುನಾದಿ

ಸದಾಚರಣೆಯ ಉದಾಹರಣೆಯೇ ಉತ್ತಮವಾದ ಉಪದೇಶ.
ಎಂದು ಸಾರುತಿಹುದು ಒಂದು ನಾಣ್ನುಡಿಯು
ಈ ಜಾಣ್ನುಡಿಯು ನಿನಗಾಗಿಯೇ ಹೇಳಿದಂತಿದೆ
ಎಮಗೆ ಸ್ಫೂರ್ತಿಯಾಗಿದೆ ನಿನ್ನ ಜೀವನ ಗಾಥೆಯು

ನಾ ತಮ್ಮನಾದರೂ ನೀ ನನ್ನ ಕಾಣುತ್ತಿದ್ದೆ ಗುರುವಿನಾ ಭಾವದಲಿ (ಅದಕಾಗಿ)
ಹೃದಯಾಂತರದಿಂ ಅರ್ಪಿಸುವೆ ನಮನವನು ಮನದಲಿ.

ಭಾವನದಿಯಲಿ ಮಿಂದು ಒಂದು ಜೀವನದಿ ನೀನಾಗಿದ್ದೆ.
ಸಹಾಯ ಹಸ್ತಗಳ ಪೂರವೇ ನೀ ಚಾಚಿ ಚೆಲ್ಲಿದ್ದೆ
ಅದ ಬಾಚಿ ಪಡೆದಿದ್ದ ಜನರ ಸಂಖ್ಯೆಯು ತಿಳಿಯದು
ಮನಕೆ ಬಂದಂತೆ ಟೀಕಿಸಿದ ಸಂಖ್ಯೆಯೂ ಅರಿಯದು

ನಿಮ್ಮ ಮನೆಯಾಗಿತ್ತು ಓದುಗರ ವಿದ್ಯಾಶ್ರಮ
ನಿಮ್ಮ ಮನೆಯಾಗಿತ್ತು ರೋಗಿಗಳ ಸೇವಾಶ್ರಮ
ದಂಪತಿಗಳೀರ್ವರೂ ಕಟ್ಟಿದಿರಿ ಟೊಂಕವನು
ಎದುರಿಸಿದಿರಿ ಆದರೂ ಟೀಕೆಗಳ ವರ್ಷವನು

ನಿಮ್ಮ ಹೃದಯವಂತಿಕೆಯ ಸಿರಿ(ಹಿರಿ)ತನವ ಅರಿಯದೇ ಹೋದವು
ನಿಮ್ಮ ಹುಲಿಯ ಘರ್ಜನೆಯ ಮಾತುಗಳು ಆದವು ಅದಕೆ ಕಾರಣವು
ನಿಮ್ಮ ಪಶ್ಚಾತ್ತಪದ ಕೂಗಿಗೆ ಓಗೊಟ್ಟ ಆ ಕಂಚಿಕಾಮಾಕ್ಷಿ
ಕರುಣಿಸಿದಳು ಮೋಕ್ಷವನು ಮಿಂಚಿನಾ ವೇಗದಿ ಮುಚ್ಚಿ ನಿಮ್ಮ ಅಕ್ಷಿ

–ಬಾ.ಕೇ

ಕರಿಯ ಹಕ್ಕಿಯೊಂದು ಬಂದು
ಎದರುಗೊಡೆ ಮೇಲೆ ನಿಂದು

ಮಧುರಗಾನ ಹಾಡಿತು |
ನನ್ನ ಎದೆಯು ತುಂಬಿ ನಿಂತು
ಮನದ ಮೊಬ್ಬಿ ಕರಗಿ ತಿಂತು |
ಅದನು ನೋಡಿ ಕರಿಯ ಹಕ್ಕಿ
ಸೊಕ್ಕಿನಿಂದ ಮತ್ತೆ ಹಾಡಿ
ನೀಲ ಗಗನ ಸೇರಿತು |

ನನ್ನ ನಯನ ಬೆಳಗಿತು
ನನ್ನ ಹೃದಯ ಅರಳಿತು |

kaveri


ಮೇಘ ಮಂಡಲದಿಂದ ಸುರಿದು ಬಂದಿಹಳು….

ಭಾಗಮಂಡಲದಲ್ಲಿ ಜನುಮ ತಾಳಿಹಳೂ….

ಧರೆಗಿಳಿದು ಬಂದಿಹಳು ಕೊಡಗಿನಾ ಕಾವೇರಿ….

ಜೀವನದಿ ಎನಿಸಿಹಳು ಬೆಡಗಿನಾ ಕಾವೇರಿ….

ಧುಮ್ಮಿಕ್ಕಿ ಧುಮುಕುತ್ತ ಹಾಲ್ನೊರೆಯ ಚೆಲ್ಲುತ….

ಜಾತಿ ಭೇದವ ಮೀರಿ ಹರಿದಿಹಳು ಈ ತಾಯಿ….

ಶ್ರೀರಂಗನಾಥನ ಬಳಸಿ ಸುತ್ತಿಹಳು…..

ರೈತ ಜೀವಿಗಳ ಮನದಲ್ಲಿ ನೆಲಸಿಹಳು…..

ಶಿಲ್ಪಿ ಚಾತುರ್ಯಕ್ಕೆ ಮೆಚ್ಚಿ ನಿಂತಿಹಳಲ್ಲಿ

ಅಭಯ ಮುದ್ರೆಯ ತೋರಿ ಹರಸುತಿಹಳಲ್ಲಿ..

ಧರೆಗೆ ಹಾಸಿಹಳು ಹಸಿರು ಪೀತಾಂಬರವ

ಮನೆಮನೆಯ ಬೆಳಗಿಹಳು ಜ್ಯೋತಿಯಾ ಬೆಳಕಿಂದ

ವನ್ಯ ಮೃಗಗಳಿಗೆಲ್ಲ ಆಶ್ರಯವ ಕೊಟ್ಟಿಹಳು

ಪಕ್ಷಿಧಾಮಗಳನ್ನು ಮಡಿಲಲ್ಲಿ ಇಟ್ಟಿಹಳು

ಕನ್ನಡತಿ ಕಾವೇರಿ ಈ ನಮ್ಮ ತಾಯಿ

ಸಾರಿ ಹೇಳುತಲಿಹಳು ನಮ್ಮವಳು ಎಂದು


(ಈ ಹಾಡನ್ನು ಎರಡು ಬಾರಿ ನೃತ್ಯರೂಪಕವಾಗಿ ಪ್ರದರ್ಶಿಸಲ್ಪಟ್ಟಿದೆ)

ದಾಸವಾಳ

daasavala

ನಿನ್ನೆ ನೋಡಿದಾ ತುಂಬುಹರೆಯದ

ಕೈಬೀಸಿ ಕರೆದ, ನಕ್ಕುನಲಿದಾ ದಾಸವಾಳ

ಇಂದು ಮುದುಡಿ ಬಾಡಿ ಬೆಂಡಾಗಿ

ಭೂತಾಯಿ ಅಪ್ಪಿಹುದು

ಜೀವನದ ಅರ್ಥವ ಸಾರುತಿಹುದು

ರೈತ

news-farmer.jpg

ಕೆಸರುಗದ್ದೆಗಳಲಿ ಉಸಿರ್ ಹಿಡಿದು ದುಡಿಯುತಿಹ

ಬೆವರು ಹನಿಗಳಷ್ಟು ಹಣವ ಸುರಿದು

ಹಸಿರು ತೆನೆಗಳಾ ನೋಡುವಾಹಂಬಲದಿ

ಹಸಿದ ಹೊಟ್ಟೆಯನು ತುಂಬುವಾ ಆಸೆಯಲಿ

ಬಿಸಿಯುಸಿರು ಬಿಡುತಿಹನು

ಅರೆನಗ್ನನಾಗಿ  ನಮ್ಮ ರೈತ  ಜೀವಿ

ಮಧುರೈ

 ತೆಮ್ಪ್ಲೆ

ಎತ್ತ ನೋಡಿದರತ್ತ ಗಗನ ಚುಂಬಿತ ಗೋಪುರ

ತಲೆ ಎತ್ತಿ ನಿಂದಿಹವು ಕಲೆಯ ಮೂರ್ತಿವೆತ್ತಾಗಿ

ಗರ್ಭದಲಿ ನಿಂತಿಹಳು ಮಧುರೆ ಮೀನಾಕ್ಷಿ

ಕಾಮಪ್ರದೆಯಾಗಿಹಳು ಈ ಮಧುರೆ ಕಾಮಾಕ್ಷಿ

ಅರ್ಪಿತ

ganesh

 

ಕುಬ್ಜ ದೇಹದ, ಬೊಜ್ಜು ಹೊಟ್ಟೆಯ

ಮೇಲೊಂದಿರುವುದು ಆನೆಯ ಮುಖವು

ನೋಡಲು ಕಾಣುವ ಹಾಸ್ಯಾಕಾರ

ಆದರು ಆಗಿದ ಪ್ರಣವಾಕಾರ

ವೇಗದಿ ಬರುವನು ಮಂಗಳಾಕಾರ

ತೋರಲು ಹೃದಯದಿ ಸಾಕ್ಷಾತ್ಕಾರ

ಮೋದಕ ಪ್ರಿಯನು ಬಾಳ ರಸಾಯನ

ಅರ್ಪಿತನವನಿಗೆ ಕವನ ರಸಾಯನ

ಇದು ಪ್ರಯತ್ನ ಇಡುಗೆ

viswarupa