Feeds:
Posts
Comments

ಕರಿಯ ಹಕ್ಕಿಯೊಂದು ಬಂದು
ಎದರುಗೊಡೆ ಮೇಲೆ ನಿಂದು

ಮಧುರಗಾನ ಹಾಡಿತು |
ನನ್ನ ಎದೆಯು ತುಂಬಿ ನಿಂತು
ಮನದ ಮೊಬ್ಬಿ ಕರಗಿ ತಿಂತು |
ಅದನು ನೋಡಿ ಕರಿಯ ಹಕ್ಕಿ
ಸೊಕ್ಕಿನಿಂದ ಮತ್ತೆ ಹಾಡಿ
ನೀಲ ಗಗನ ಸೇರಿತು |

ನನ್ನ ನಯನ ಬೆಳಗಿತು
ನನ್ನ ಹೃದಯ ಅರಳಿತು |

kaveri


ಮೇಘ ಮಂಡಲದಿಂದ ಸುರಿದು ಬಂದಿಹಳು….

ಭಾಗಮಂಡಲದಲ್ಲಿ ಜನುಮ ತಾಳಿಹಳೂ….

ಧರೆಗಿಳಿದು ಬಂದಿಹಳು ಕೊಡಗಿನಾ ಕಾವೇರಿ….

ಜೀವನದಿ ಎನಿಸಿಹಳು ಬೆಡಗಿನಾ ಕಾವೇರಿ….

ಧುಮ್ಮಿಕ್ಕಿ ಧುಮುಕುತ್ತ ಹಾಲ್ನೊರೆಯ ಚೆಲ್ಲುತ….

ಜಾತಿ ಭೇದವ ಮೀರಿ ಹರಿದಿಹಳು ಈ ತಾಯಿ….

ಶ್ರೀರಂಗನಾಥನ ಬಳಸಿ ಸುತ್ತಿಹಳು…..

ರೈತ ಜೀವಿಗಳ ಮನದಲ್ಲಿ ನೆಲಸಿಹಳು…..

ಶಿಲ್ಪಿ ಚಾತುರ್ಯಕ್ಕೆ ಮೆಚ್ಚಿ ನಿಂತಿಹಳಲ್ಲಿ

ಅಭಯ ಮುದ್ರೆಯ ತೋರಿ ಹರಸುತಿಹಳಲ್ಲಿ..

ಧರೆಗೆ ಹಾಸಿಹಳು ಹಸಿರು ಪೀತಾಂಬರವ

ಮನೆಮನೆಯ ಬೆಳಗಿಹಳು ಜ್ಯೋತಿಯಾ ಬೆಳಕಿಂದ

ವನ್ಯ ಮೃಗಗಳಿಗೆಲ್ಲ ಆಶ್ರಯವ ಕೊಟ್ಟಿಹಳು

ಪಕ್ಷಿಧಾಮಗಳನ್ನು ಮಡಿಲಲ್ಲಿ ಇಟ್ಟಿಹಳು

ಕನ್ನಡತಿ ಕಾವೇರಿ ಈ ನಮ್ಮ ತಾಯಿ

ಸಾರಿ ಹೇಳುತಲಿಹಳು ನಮ್ಮವಳು ಎಂದು


(ಈ ಹಾಡನ್ನು ಎರಡು ಬಾರಿ ನೃತ್ಯರೂಪಕವಾಗಿ ಪ್ರದರ್ಶಿಸಲ್ಪಟ್ಟಿದೆ)

ದಾಸವಾಳ

daasavala

ನಿನ್ನೆ ನೋಡಿದಾ ತುಂಬುಹರೆಯದ

ಕೈಬೀಸಿ ಕರೆದ, ನಕ್ಕುನಲಿದಾ ದಾಸವಾಳ

ಇಂದು ಮುದುಡಿ ಬಾಡಿ ಬೆಂಡಾಗಿ

ಭೂತಾಯಿ ಅಪ್ಪಿಹುದು

ಜೀವನದ ಅರ್ಥವ ಸಾರುತಿಹುದು

ರೈತ

news-farmer.jpg

ಕೆಸರುಗದ್ದೆಗಳಲಿ ಉಸಿರ್ ಹಿಡಿದು ದುಡಿಯುತಿಹ

ಬೆವರು ಹನಿಗಳಷ್ಟು ಹಣವ ಸುರಿದು

ಹಸಿರು ತೆನೆಗಳಾ ನೋಡುವಾಹಂಬಲದಿ

ಹಸಿದ ಹೊಟ್ಟೆಯನು ತುಂಬುವಾ ಆಸೆಯಲಿ

ಬಿಸಿಯುಸಿರು ಬಿಡುತಿಹನು

ಅರೆನಗ್ನನಾಗಿ  ನಮ್ಮ ರೈತ  ಜೀವಿ

ಮಧುರೈ

 ತೆಮ್ಪ್ಲೆ

ಎತ್ತ ನೋಡಿದರತ್ತ ಗಗನ ಚುಂಬಿತ ಗೋಪುರ

ತಲೆ ಎತ್ತಿ ನಿಂದಿಹವು ಕಲೆಯ ಮೂರ್ತಿವೆತ್ತಾಗಿ

ಗರ್ಭದಲಿ ನಿಂತಿಹಳು ಮಧುರೆ ಮೀನಾಕ್ಷಿ

ಕಾಮಪ್ರದೆಯಾಗಿಹಳು ಈ ಮಧುರೆ ಕಾಮಾಕ್ಷಿ

ಅರ್ಪಿತ

ganesh

 

ಕುಬ್ಜ ದೇಹದ, ಬೊಜ್ಜು ಹೊಟ್ಟೆಯ

ಮೇಲೊಂದಿರುವುದು ಆನೆಯ ಮುಖವು

ನೋಡಲು ಕಾಣುವ ಹಾಸ್ಯಾಕಾರ

ಆದರು ಆಗಿದ ಪ್ರಣವಾಕಾರ

ವೇಗದಿ ಬರುವನು ಮಂಗಳಾಕಾರ

ತೋರಲು ಹೃದಯದಿ ಸಾಕ್ಷಾತ್ಕಾರ

ಮೋದಕ ಪ್ರಿಯನು ಬಾಳ ರಸಾಯನ

ಅರ್ಪಿತನವನಿಗೆ ಕವನ ರಸಾಯನ

ಇದು ಪ್ರಯತ್ನ ಇಡುಗೆ

viswarupa