Feeds:
Posts
Comments

Archive for March, 2007

ಮೇಘ ಮಂಡಲದಿಂದ ಸುರಿದು ಬಂದಿಹಳು….
ಭಾಗಮಂಡಲದಲ್ಲಿ ಜನುಮ ತಾಳಿಹಳೂ….
ಧರೆಗಿಳಿದು ಬಂದಿಹಳು ಕೊಡಗಿನಾ ಕಾವೇರಿ….
ಜೀವನದಿ ಎನಿಸಿಹಳು ಬೆಡಗಿನಾ ಕಾವೇರಿ….
ಧುಮ್ಮಿಕ್ಕಿ ಧುಮುಕುತ್ತ ಹಾಲ್ನೊರೆಯ ಚೆಲ್ಲುತ….
ಜಾತಿ ಭೇದವ ಮೀರಿ ಹರಿದಿಹಳು ಈ ತಾಯಿ….
ಶ್ರೀರಂಗನಾಥನ ಬಳಸಿ ಸುತ್ತಿಹಳು…..
ರೈತ ಜೀವಿಗಳ ಮನದಲ್ಲಿ ನೆಲಸಿಹಳು…..
ಶಿಲ್ಪಿ ಚಾತುರ್ಯಕ್ಕೆ ಮೆಚ್ಚಿ ನಿಂತಿಹಳಲ್ಲಿ…
ಅಭಯ ಮುದ್ರೆಯ ತೋರಿ ಹರಸುತಿಹಳಲ್ಲಿ..
ಧರೆಗೆ ಹಾಸಿಹಳು ಹಸಿರು ಪೀತಾಂಬರವ
ಮನೆಮನೆಯ ಬೆಳಗಿಹಳು ಜ್ಯೋತಿಯಾ ಬೆಳಕಿಂದ
ವನ್ಯ ಮೃಗಗಳಿಗೆಲ್ಲ ಆಶ್ರಯವ ಕೊಟ್ಟಿಹಳು
ಪಕ್ಷಿಧಾಮಗಳನ್ನು ಮಡಿಲಲ್ಲಿ ಇಟ್ಟಿಹಳು
ಕನ್ನಡತಿ ಕಾವೇರಿ ಈ ನಮ್ಮ ತಾಯಿ
ಸಾರಿ ಹೇಳುತಲಿಹಳು ನಮ್ಮವಳು ಎಂದು

(ಈ ಹಾಡನ್ನು ಎರಡು ಬಾರಿ ನೃತ್ಯರೂಪಕವಾಗಿ [...]

Read Full Post »

ದಾಸವಾಳ

ನಿನ್ನೆ ನೋಡಿದಾ ತುಂಬುಹರೆಯದ
ಕೈಬೀಸಿ ಕರೆದ, ನಕ್ಕುನಲಿದಾ ದಾಸವಾಳ
ಇಂದು ಮುದುಡಿ ಬಾಡಿ ಬೆಂಡಾಗಿ
ಭೂತಾಯಿ ಅಪ್ಪಿಹುದು
ಜೀವನದ ಅರ್ಥವ ಸಾರುತಿಹುದು

Read Full Post »

ರೈತ

ಕೆಸರುಗದ್ದೆಗಳಲಿ ಉಸಿರ್ ಹಿಡಿದು ದುಡಿಯುತಿಹ
ಬೆವರು ಹನಿಗಳಷ್ಟು ಹಣವ ಸುರಿದು
ಹಸಿರು ತೆನೆಗಳಾ ನೋಡುವಾಹಂಬಲದಿ
ಹಸಿದ ಹೊಟ್ಟೆಯನು ತುಂಬುವಾ ಆಸೆಯಲಿ
ಬಿಸಿಯುಸಿರು ಬಿಡುತಿಹನು
ಅರೆನಗ್ನನಾಗಿ  ನಮ್ಮ ರೈತ  ಜೀವಿ

Read Full Post »

ಮಧುರೈ

 
ಎತ್ತ ನೋಡಿದರತ್ತ ಗಗನ ಚುಂಬಿತ ಗೋಪುರ
ತಲೆ ಎತ್ತಿ ನಿಂದಿಹವು ಕಲೆಯ ಮೂರ್ತಿವೆತ್ತಾಗಿ
ಗರ್ಭದಲಿ ನಿಂತಿಹಳು ಮಧುರೆ ಮೀನಾಕ್ಷಿ
ಕಾಮಪ್ರದೆಯಾಗಿಹಳು ಈ ಮಧುರೆ ಕಾಮಾಕ್ಷಿ

Read Full Post »

ಅರ್ಪಿತ

 

ಕುಬ್ಜ ದೇಹದ, ಬೊಜ್ಜು ಹೊಟ್ಟೆಯ

ಮೇಲೊಂದಿರುವುದು ಆನೆಯ ಮುಖವು

ನೋಡಲು ಕಾಣುವ ಹಾಸ್ಯಾಕಾರ

ಆದರು ಆಗಿದ ಪ್ರಣವಾಕಾರ

ವೇಗದಿ ಬರುವನು ಈ ಮಂಗಳಾಕಾರ

ತೋರಲು ಹೃದಯದಿ ಸಾಕ್ಷಾತ್ಕಾರ

ಮೋದಕ ಪ್ರಿಯನು ಬಾಳ ರಸಾಯನ

ಅರ್ಪಿತನವನಿಗೆ ಈ ಕವನ ರಸಾಯನ

Read Full Post »

ಇದು ಪ್ರಯತ್ನ ಇಡುಗೆ

 

Read Full Post »