ಮೇಘ ಮಂಡಲದಿಂದ ಸುರಿದು ಬಂದಿಹಳು….
ಭಾಗಮಂಡಲದಲ್ಲಿ ಜನುಮ ತಾಳಿಹಳೂ….
ಧರೆಗಿಳಿದು ಬಂದಿಹಳು ಕೊಡಗಿನಾ ಕಾವೇರಿ….
ಜೀವನದಿ ಎನಿಸಿಹಳು ಬೆಡಗಿನಾ ಕಾವೇರಿ….
ಧುಮ್ಮಿಕ್ಕಿ ಧುಮುಕುತ್ತ ಹಾಲ್ನೊರೆಯ ಚೆಲ್ಲುತ….
ಜಾತಿ ಭೇದವ ಮೀರಿ ಹರಿದಿಹಳು ಈ ತಾಯಿ….
ಶ್ರೀರಂಗನಾಥನ ಬಳಸಿ ಸುತ್ತಿಹಳು…..
ರೈತ ಜೀವಿಗಳ ಮನದಲ್ಲಿ ನೆಲಸಿಹಳು…..
ಶಿಲ್ಪಿ ಚಾತುರ್ಯಕ್ಕೆ ಮೆಚ್ಚಿ ನಿಂತಿಹಳಲ್ಲಿ…
ಅಭಯ ಮುದ್ರೆಯ ತೋರಿ ಹರಸುತಿಹಳಲ್ಲಿ..
ಧರೆಗೆ ಹಾಸಿಹಳು ಹಸಿರು ಪೀತಾಂಬರವ
ಮನೆಮನೆಯ ಬೆಳಗಿಹಳು ಜ್ಯೋತಿಯಾ ಬೆಳಕಿಂದ
ವನ್ಯ ಮೃಗಗಳಿಗೆಲ್ಲ ಆಶ್ರಯವ ಕೊಟ್ಟಿಹಳು
ಪಕ್ಷಿಧಾಮಗಳನ್ನು ಮಡಿಲಲ್ಲಿ ಇಟ್ಟಿಹಳು
ಕನ್ನಡತಿ ಕಾವೇರಿ ಈ ನಮ್ಮ ತಾಯಿ
ಸಾರಿ ಹೇಳುತಲಿಹಳು ನಮ್ಮವಳು ಎಂದು
(ಈ ಹಾಡನ್ನು ಎರಡು ಬಾರಿ ನೃತ್ಯರೂಪಕವಾಗಿ [...]